ಮುಖಪುಟ ಗೌರಿಬಿದನೂರು
Hostels in Gowribidanuru

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ಗೌರಿಬಿದನೂರು

ಗೌರಿಬಿದನೂರಿನಲ್ಲಿ 1970-71 ನೇ ಸಾಲಿನಿಂದ ಬಾಡಿಗೆ ಮನೆಯಲ್ಲಿ ಹಾಸ್ಟಲ್ ನಡೆಸಿಕೊಂಡು ಬರುತ್ತಿದ್ದು ಮುನಿಸಿಪಾಲಿಟಿಯಿಂದ ೨೦,೮೬೦/- ರೂ. ಗಳಿಗೆ ಒಂದು ನಿವೇಶನವನ್ನು ಕೊಂಡುಕೊಳ್ಳಲಾಯಿತು. 1984 ರಲ್ಲಿ ಈ ನಿವೇಶನವನ್ನು ೨೬-೮೦೪ ರೂ. ಗಳಿಗೆ ಮಾರಿ ಈಗ ಹಾಲಿ ಹಾಸ್ಟೆಲ್ ಇರುವ ಕಟ್ಟಡವನ್ನು ಶ್ರೀ ಆಂಜನೇಯ ಗೌಡರಿಂದ ೨೨.೦೦೦ ರೂಪಾಯಿಗಳಿಗೆ ಕೊಳ್ಳಲಾಯಿತು. ಈ ಹಣವನ್ನು ಆಂಜನೇಯ ಗೌಡರು ಪುನಃ ಹಿಂದಕ್ಕೆ ಕೊಟ್ಟು ನಿವೇಶನವನ್ನು ದಾನವಾಗಿ ಕೊಟ್ಟಿದ್ದಾರೆ. ಈ ನಿವೇಶನದಲ್ಲಿರುವ ಕಟ್ಟಡದ ಬೆಲೆ ಡಿಸೆಂಬರ್ 1986 ಕ್ಕೆ ೪.೦೦,೦೦೦ ರೂಪಾಯಿ ಆಗಿದೆ.
ಗೌರಿಬಿದನೂರಿನಲ್ಲಿ 1986 ರವರೆವಿಗೂ ವಿದ್ಯಾರ್ಥಿನಿಲಯ ಬಾಡಿಗೆ ಕಟ್ಟಡದಲ್ಲಿ ನಡೆಸಿಕೊಂಡು ಬಂದರೂ ಈಗ ನಮ್ಮದೇ ವಿದ್ಯಾರ್ಥಿ ನಿಲಯದ ಕಟ್ಟಡ ಇದ್ದರೂ ಸಾಕಷ್ಟು ವಿದ್ಯಾರ್ಥಿಗಳು ಬಾರದೇ ಇರುವುದರಿಂದ ವಿದ್ಯಾರ್ಥಿನಿಲಯ ಸರಿಯಾಗಿ ನಡೆಯುತ್ತಿಲ್ಲ. ಗೌರಿಬಿದನೂರಿನಲ್ಲಿ ಶ್ರೀಮತಿ ಚಿಕ್ಕಮ್ಮ ಮತ್ತಿ ಶ್ರೀ ವೆಂಕಟರಮಣಗೌಡ, ಪಟೇಲರು, ಕರೇಕಲ್ಲಹಳ್ಳಿ ಇವರು ದಾನವಾಗಿ ನೀಡಿರುವ ೨೦ ಗುಂಟೆ ಸ್ವತ್ತನಲ್ಲಿ ದಾನಿಗಳು ಮತ್ತು ಸ್ಥಳೀಯ ಶಾಸಕರಾದ ಶ್ರೀಯುತ ಶಿವಶಂಕರರೆಡ್ಡಿ ಯವರ ಅನುದಾನದಲ್ಲಿ ನಿರ್ಮಿಸಿರುವ ವಿವಿದ ಕಟ್ಟಡಗಳಲ್ಲಿ ಸಮತಾ ನರ್ಸರಿ ಶಾಲೆ, ಸಮತಾ ಫ್ರೌಢಶಾಲೆಗಳನ್ನು ನಡೆಸಲಾಗುತ್ತಿದೆ. ದಾನಿಗಳ ಸಹಕಾರದಿಂದ ಆಡುಗೆ ಕೋಣೆ, ಆಡಳಿತ ಕಚೇರಿ, ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಸಮತಾ ಪ್ರೌಡಶಾಲೆ ಸರ್ಕಾರದ ಅನುದಾನಕ್ಕೆ ಒಳಪಟ್ಟಿದ್ದು, ಸಂಘದ ವತಿಯಿಂದ ಸುಸೂತ್ರವಾಗಿ ಮುನ್ನಡೆಸಲಾಗುತ್ತಿದೆ. ಪ್ರಸ್ತುತ ಸಮತಾ ನರ್ಸರಿ ಮತ್ತು ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಕೊರತೆ, ಕಟ್ಟಡದ ಕೊರತೆ ಮತ್ತು ನಷ್ಟದ ಕಾರಣದಿಂದ ಮತಬಾಂದವರೊಬ್ಬರಿಗೆ ಕ್ರಯಕ್ಕೆ ಕೊಡಲಾಗಿದೆ. ಗೌರಿಬಿದನೂರಿನಲ್ಲಿ ಒಂದು ಸುಂದರ ಸಮುದಾಯ ಭವನ ವನ್ನು ನಿರ್ಮಿಸಲು ಡಾ|| ಮುಖ್ಯಮಂತ್ರಿ ಚಂದ್ರು ರವರ ೧೫ ಲಕ್ಷ ರೂಗಳನ್ನು ಅನುದಾನವನ್ನು ವಿನಿಯೋಗಿಸಲಾಗಿದೆ.