ಮುಖಪುಟ ವಿದ್ಯಾರ್ಥಿನಿಲಯದ ಹಳೇ ವಿದ್ಯಾರ್ಥಿಗಳ ಸಂಘ
ಹಿಂದೂ ಸಾದರ ವಿದ್ಯಾರ್ಥಿನಿಲಯದ ಹಳೇ ವಿದ್ಯಾರ್ಥಿಗಳ ಸಂಘ

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ) ಬೆಂಗಳೂರು ರವರು ಪೂಜ್ಯ ಶ್ರೀ ದಿ. ಮಂಡಿ ಹರಿಯಣ್ಣನವರ ವಿದ್ಯಾರ್ಥಿನಿಲಯದ 28 ನೇ ವಾರ್ಷಿಕೋತ್ಸವ ಸಮಾರಂಭವನ್ನು ದಿನಾಂಕ 13.03.2016 ರಂದು ಸಂಜೆ 4.00 ಗಂಟೆಗೆ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದು ಅಂದೇ ಪೂಜ್ಯ ಶ್ರೀ ದಿ. ಮಂಡಿ ಹರಿಯಣ್ಣನವರ ಸ್ಮಾರಕ ವಿದ್ಯಾರ್ಥಿನಿಲಯ ಬೆಂಗಳೂರು ದ ಹಳೆಯ ವಿದ್ಯಾರ್ಥಿಗಳ ಸಂಘದ ಪ್ರಾರಂಭೋತ್ಸವವನ್ನು ಆಯೋಜಿಸಲಾಗಿತ್ತು.

ಪೂಜ್ಯ ಶ್ರೀ ದಿ. ಮಂಡಿ ಹರಿಯಣ್ಣನವರ ಸ್ಮಾರಕ ವಿದ್ಯಾರ್ಥಿನಿಲಯ ಬೆಂಗಳೂರು ದ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆಯನ್ನು ಶ್ರೀಯುತ ಹೆಚ್. ಶಶಿಧರ್ ರವರು, ನಿವೃತ್ತ ಐ.ಎ.ಎಸ್. ಅಧಿಕಾರಿಗಳು ನೆರವೇರಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಡಿ.ಈ. ರವಿಕುಮಾರ್, ಅಧ್ಯಕ್ಷರು, ಹಿಂ.ಸಾ.ಕ್ಷೇ, ಸಂಘ, ಬೆಂಗಳೂರು ರವರು ವಹಿಸಿದ್ದರು.

ಮುಖ್ಯ ಅಥಿತಿಗಳಾಗಿ ಶ್ರೀ. ಡಾ|| ಶಿವು ರವರು, ಡಾ||ಮೃತ್ಯುಂಜಯಣ್ಣನವರು, ಡಾ|| ಎಸ್.ಎಂ. ಸುರೇಶ್ ರವರು, ಕ್ಯಾಪ್ಟನ್ ಎಂ.ಎಂ. ಹರೀಶ್ ರವರು, ಶ್ರೀ ಎಂ. ಎಂ. ಮಹೇಶ್ ರವರು, ಶ್ರೀ ಬಿ.ಆರ್. ಚನ್ನಕೇಶವರವರು ಹಾಗೂ ವಿಷೇಶ ಆಹ್ವಾನಿತರಾಗಿ ಶ್ರೀ ಹೆಚ್. ಶ್ರೀಧರ್ ರವರು, ಶ್ರೀ ಕೆ.ಎನ್. ಹೇಮಚಂದ್ರರವರು, ಶ್ರೀಮತಿ ಪದ್ಮಾ ಚಂದ್ರು ರವರು, ಶ್ರೀ. ಬಿ.ಎನ್. ಲಕ್ಷ್ಮೀಪತಿರವರು, ಶ್ರೀ ಮಾಗೋಡು ದೊಡ್ಡೇಗೌಡರವರು, ಶ್ರೀ.ಆರ್. ಸದಾನಂದ ರವರು , ಶ್ರೀ ಭೋಜರಾಜು ರವರು, ಶ್ರೀ ನಾಗೇಂದ್ರ ಕೇ.ಜಿ. ರವರು ಮತ್ತು ಶ್ರೀ ರಮೇಶ್ ರವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ದಾನಿಗಳಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಸಮಾಜದ ಗಣ್ಯರು, ಕೇಂದ್ರ ಸಮಿತಿ ನಿರ್ದೇಶಕರುಗಳು, ತಾ|| ಸಮಿತಿ, ವನಿತಾ ಮಂಡಳಿ, ವಿವಿಧ ಸಂಘ-ಸಂಸ್ಥೆ ಸದಸ್ಯರುಗಳು ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳ ಆಯ್ಕೆ ಮತ್ತು ಮುಂದಿನ ಕಾರ್ಯಕ್ರಮಗಳ ಬಗ್ಗೆ ಕೆಳಕಂಡ ವೆಬ್ ಸೈಟ್ ನಲ್ಲಿ ತಿಳಿಯಬಹಿದಾಗಿದೆ.....
www.hsks students association.com